ಅರ್ಜಿ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಹಾಗೂ ಸಮತಾ ಅಧ್ಯಯನ ಕೇಂದ್ರ, ಮೈಸೂರು ಸಹಯೋಗದೊಂದಿಗೆ ಎರಡು ದಿನದ ಕಾವ್ಯ ಕಮ್ಮಟವನ್ನು ಆಯೋಜಿಸಲಾಗಿದೆ. ಹಿರಿಯ ಕವಯಿತ್ರಿ ಪ್ರತಿಭಾ ನಂದಕುಮಾರ್ ಕಮ್ಮಟದ ನಿರ್ದೇಶಕರಾಗಿರುತ್ತಾರೆ.

ದಿನಾಂಕ : ಮೇ 31 ಹಾಗೂ ಜೂನ್ 1

ಸ್ಥಳ: ಇಂಟರ್ನ್ಯಾಷನಲ್ ಯೂತ್ ಹಾಸ್ಟೆಲ್, ಗೋಕುಲಂ, ಮೈಸೂರು

ನಿಯಮಗಳು:

1 ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿಯಿರುವ ಲೇಖಕಿಯರು ಒಂದಾದರೂ ಕವನ ಸಂಕಲನ ಹೊರತಂದಿರಬೇಕು ಅಥವಾ ಕವನಗಳನ್ನು ಪ್ರಕಟ ಮಾಡಿರಬೇಕು.

2 ಕೇವಲ 30 ಜನಕ್ಕೆ ಮಾತ್ರ ಈ ಅವಕಾಶ ಇರುವುದರಿಂದ ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ.

3 ಕಮ್ಮಟದಲ್ಲಿ ಭಾಗವಹಿಸಿದವರು ಎರಡೂ ದಿನ ಶಿಬಿರದಲ್ಲಿಯೇ ಇರಬೇಕು.

4 ನೋಂದಣಿ ಶುಲ್ಕ 500 ರೂ ಇದ್ದು, ನೋಂದಣಿ ಸಮಯದಲ್ಲಿ ಪಾವತಿಸಬೇಕು. ಯಾವುದೇ ಕಾರಣದಿಂದ ಭಾಗವಹಿಸಲು ಸಾಧ್ಯವಾಗದೇ ಇದ್ದರೆ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

5 ಜಿಲ್ಲಾವಾರು ಪ್ರತಿನಿಧಿಗಳಿಗೆ ಅವಕಾಶ ನೀಡುವ ಆದ್ಯತೆ ಇರುವುದರಿಂದ ಶಿಬಿರಾರ್ಥಿಗಳ ಅಂತಿಮ ಆಯ್ಕೆಯ ನಿರ್ಧಾರ ಕಲೇಸಂನದು.

6 ಶಿಬಿರಾರ್ಥಿಗಳಿಗೆ ಕೆಲವು ಪಠ್ಯ ಸಾಮಗ್ರಿ(study material),ಬ್ಯಾಗು, ಪೆನ್ನು ಮತ್ತು ನೋಟ್ ಬುಕ್ ನೀಡಲಾಗುತ್ತದೆ.

7 ಶಿಬಿರಾರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಎರಡು ದಿನದ ತಿಂಡಿ, ಊಟ ಮತ್ತು ವಸತಿ ಉಚಿತವಾಗಿರುತ್ತದೆ.

ಗೂಗಲ್ ಫಾರ್ಮ್ ಅನ್ನು ಸದ್ಯದಲ್ಲಿಯೇ ಹಾಕುತ್ತೇವೆ. ಆಸಕ್ತರು ತಕ್ಷಣ ಅದನ್ನು ತುಂಬಿ ಕಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸರ್ವಮಂಗಳಾ: 9448818900
ಸುಮಾ ಸತೀಶ್: 9481480220